Sunday, February 6, 2011

ಕೋಮುವಾದಿ-ಯಾರು


ಚಿ. ಮೂ ಅವರನ್ನು ರಾಜ್ಯಪಾಲರು 'ಕೋಮುವಾದಿ' ಎಂದು ಆರೋಪಿಸಿ ಅವರಿಗೆ ಬೆಂಗಳೂರು ವಿಶ್ವ ವಿದ್ಯಾಲಯ ಶಿಫಾರಸು ಮಾಡಿರುವ ಗೌರವ ಡಾಕ್ಟರೇಟುನ್ನು ನಿರಾಕರಿಸಿದ ರಾಜ್ಯ ಪಾಲರ ಕ್ರಮದ ಹಿನ್ನೆಲೆಯಲ್ಲಿ ನಾನು  ಈ ಲೇಖನವನ್ಬಂನು ಪ್ಟರಕಟಿಸಲಿಚ್ಚಿಸಿದ್ದೆನೆ.  ನನ್ನ ಕೃತಿಗೆ ಕ್ಷೇತ್ರ ಕಾರ್ಯ ಮುಗಿಸಿದ ದಿನಗಳಲ್ಲಿ  ನನಗಾದ  ಅನುಭವಗಳ ಹಿನ್ನೆಲಯಲ್ಲಿ  ಈ ಬರಹವನ್ನು ಪೂರ್ಣ ಗೊಳಿಸಿದ್ದೆ. .ಅದನ್ನು ಪ್ರಕಟಿಸುವುದು ಈ ಸಂದರ್ಭದಲ್ಲಿ ಸೂಕ್ತ   ಎನ್ನುವುದು ನನ್ನ ಅಭಿಪ್ರಾಯ. 

ರಾಜ್ಯಪಾಲರು ಮತಾಂತರವನ್ನು ವಿರೋಧಿಸುವವರು 'ಕೋಮುವಾದಿಗಳು' ಎಂದು ಅರೋಪಿಸುವುದು ಎಷ್ಟು ಸರಿ? 

ದುರ್ಬಲ ಮನಸ್ಸಿನವರನ್ನು, ಆರ್ಥಿಕವಾಗಿ ಹಿಂದುಳಿದವರನ್ನು, ಜಾತೀಯತೆಯಿಂದ ನೊಂದುಕೊಂಡವರನ್ನು ಹುಡುಕಿ ಹೋಗಿ ನೆರವು ನೀಡುವ ನೆವದಲ್ಲಿ ಮಾನಸಿಕವಾಗಿ ಬ್ಲಾಕ್ ಮೇಲ್ ಮಾಡಿ ಮತಾಂತರಕ್ಕೆ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಮತಾಂತರ ಆಗುಲಿಚ್ಚಿಸುವವರು ಸಂಬಂಧ ಪಟ್ಟವರನ್ನು ತಾವೇ ಹುಡುಕಿಕೊಂಡು ಹೋಗಬೇಕೇ ವಿನಃ ಇವರು ಮೇಲೆ ತಿಳಿಸಿದವರ ಮನೆ ಬಾಗಿಲಿಗೆ ಹೋಗಿ ಅವರನ್ನು ಮತಾಂತರ ಮಾಡುವುದು ಬ್ಲಾಕ್ ಮೇಲ್ ತಂತ್ರವೇ ಆಗುತ್ತದೆ.  ಈ ನಿಟ್ಟಿನಲ್ಲಿ ರಾಜ್ಯ ಪಾಲರು ಸಮಚಿತ್ತದಿಂದ ಹೇಳಿಕೆಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. 

 

No comments:

Post a Comment